ಮೌನವಾಗಿಯೇ ಏಕೆ?

ಮೌನವಾಗಿಯೇ ಏಕೆ?
ಮನದನ್ನೆ
ನಾ ತಡವಾಗಿ ಬಂದುದಕೆ|
ಓಡೋಡಿ ಬಂದಿಯೇ ನಾ, ಕೊಂಚ
ನಿನಗೆ ಬೇಸರವಾಗಿರುವುದಕೆ||

ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ
ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ|
ಸದಾನಿನ್ನ ಚಿತ್ರ ಮನದಲಿರಿಸಿ
ದುಡಿದು ದಣಿದು ಬಂದಿಹೆ ಬಳಿಗೆ
ಪ್ರೀತಿ ತೋರಿ ಬಳಿಬಾರೆ ನನ್ನೊಲವೇ||

ನಿನಗಾಗಿ ಏನನು ತರಲಿಲ್ಲ ಇಂದು
ನನ್ನನೇ ನಿನಗಾಗಿ ತಂದು|
ಪ್ರೇಮ ಭಿಕ್ಷೆಯ ಬೇಡುತ
ನಿನ್ನ ಬಳಿ ಸುಳಿದಾಡುತಿರುವೆನಿಂದು|
ಒಮ್ಮೆ ಒರೆಗಣ್ಣಲಿನೋಡೆನ್ನ
ಚೆಲುವೆ, ನಾ ಧನ್ಯನಾಗಿಬಿಡುವೆ||

ಇಂದಿನಿಂದಲೇ ಶಪಥ ಮಾಡಿಬಿಡುವೆ
ನಾನು ದಿನಾಲು ಇನ್ನೂ ಬೇಗನೇ ಬರುವೆ|
ಬರುವಾಗ ನೀ ಬಯಸಿದನೆಲ್ಲವ ತರುವೆ
ದಯೆ ತೋರು ಓ ನನ್ನ ಚೆಲುವೇ|
ಬಳಲಿ ಬಾಯಾರಿ ಬಂದಿರುವೆ
ಪ್ರೇಮ ಸುಧೆಯ ನೀಡೆಯಾ ಒಲವೇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿರಿ ಕಥೆ
Next post ಚೈತನ್ಯ ಧಾಮ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys